ಇತಿಹಾಸ
ದೇವಾಲಯದ ನಿರ್ಮಾಣದ ಬಗ್ಗೆ ಖಚಿತವಾದ ಮಾಹಿತಿ ಅಥವಾ ಶಾಸನಗಳು ಲಬ್ಯವಿಲ್ಲದ್ದಿದ್ದರು, ಬಲ್ಲ ಮೂಲಗಳ ಪ್ರಕಾರ ಇದು ಪಾಳೇಗಾರರ ಕಾಲದಲ್ಲಿ ನಿರ್ಮಾಣಗೂಂಡಿರುವ ಸಾದ್ಯತೆಗಳು ಹೆಚ್ಚಾಗಿವೆ.
ಪವಾಡಗಳು
ಬಹಳ ಪ್ರಚಲಿತ ಇರೊ ಒಂದು ಪವಾಡ...
ಕಂಚಿ ಗೊಲ್ಲರ ಮೊಡಿಗೆ ಒಳಗಾಗಿ ನಿರ್ಜೀವವಾಗಿದ್ದ ಗರ್ಭಿಣಿ ಹೆಣ್ಣು ಮಗಳ ದೇಹ ಊರಿನ ಮುಖ್ಯ ರಸ್ತೆಯಲ್ಲಿ ಬಿದ್ದಿತ್ತು.
ಊರಿನ ಎಲ್ಲಾ ದೇವರುಗಳು, ಪವಾಡ ಪುರುಷರು ಆ ಹೆಣ್ಣು ಮಗಳಿಗೆ ಮರು ಹುಟ್ಟು ನೀಡುವಲ್ಲಿ ವಿಫಲವಾದರು.
ಆಗ ಊರಿನ ಜನ ಮೊರೆ ಹೊದದ್ದು ತಾಯಿ ಬನಶಂಕರಿಯ ಬಳಿ. ತಾಯಿ ಅಲ್ಲಿಗೆ ಅಗಮಿಸಿ ಆ ಹೆಣ್ಣು ಮಗಳಿಗೆ ಜೀವ ನೀಡಿದಳು.
ಅದರ ಕುರುಹಾಗಿ, ಊರಿನ ಆಡಳಿತ ಕಂಚಿನ ಕುದುರೆಯನ್ನು ಕಾಣಿಕೆಯಾಗಿ ನೀಡಿರುತ್ತಾರೆ.
ಈ ಎಲ್ಲಾ ಪವಾಡಗಳಿಗೆ ಯಾವುದೆ ಪುರಾವೆಗಳಿಲ್ಲದಿದ್ದರು, ಹಿರಿಯರಿಂದ ತಿಳಿಯಲಾಗಿದೆ.
ಆಚರಣೆಗಳು
1. ಬನದ ಹುಣ್ಣಿಮೆ
2. ಪ್ರತಿ ಹುಣ್ಣಿಮೆಯಂದು ಬೇಡಿ ಬಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ಮತ್ತು ಅನ್ನಸಂತರ್ಪಣೆ
3. ಶರನ್ನ ನವರಾತ್ರಿ (ದಸರಾ)
4. ಅಗ್ನಿಕುಂಡ ಮಹೋತ್ಸವ (12 ವರುಷಕೊಮ್ಮೆ)