ಈ ದೇವಾಲಯವು ಜ್ಯೋತಿರ್ಲಿಂಗದ ಮೇಲೆ ಸ್ಥಾಪಿಸಲ್ಟಟ್ಟಿದೆ ಎಂದು ಪ್ರತೀತಿ. ಸುಮಾರು 800 ವರ್ಷಗಳ ಹಿಂದೆ ತಪಸ್ವಿಯೊಬ್ಬರು ಈ ಬಿಳಿನೆಲೆ ಸ್ಥಳದಲ್ಲಿ ತಪಸ್ಸು ಮಾಡಿದ್ದರೆಂದೂ ಅವರ ತಪಸ್ಸಿಗೆ ಶಿವದೇವರು ಮೆಚ್ಚಿ ಜ್ಯೋತಿರ್ಲಿಂಗವನ್ನು ಕರುಣಿಸಿದ್ದರೆಂದೂ ತಿಳಿದು ಬರುತ್ತದೆ. ತಪಸ್ವಿಯು ಅವರ ಜೀವಮಾನದ ಕೊನೆಯ ಸಂದರ್ಭದಲ್ಲಿ ಈ ಜ್ಯೋತಿರ್ಲಿಂಗವನ್ನು ಆರಾಧಿಸಲು ಮುಂದಿನ ಪೀಳಿಗೆಗೆ ಅಸಾಧ್ಯವೆಂದು ತಿಳಿದು ಆ ಕಾಲದ ಆಡಳಿತ ವ್ಯವಸ್ಥೆಯವರನ್ನು ಮತ್ತು ಊರಿನ ಭಕ್ತಾದಿಗಳನ್ನು ಕರೆದು ಜ್ಯೋತಿರ್ಲಿಂಗವನ್ನು ಭೂಗತಗೊಳಿಸಿದ್ದು, ಅಲ್ಲಿಯೇ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪ್ರತಿಷ್ಠಾಪಿಸಿದ್ದರು ಎಂದು ತಿಳಿದು ಬಂದಿರುತ್ತದೆ. ಗೋ ಹತ್ಯಾ ದೋಷ ನಿವಾರಣೆಗೂ, ಸಂತಾನ ಪ್ರಾಪ್ತಿಗೂ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ.