ಈ ವೇದಿಕೆಯು ಕೊಡಗು ಜಿಲ್ಲೆಗೆ ಸೀಮಿತವಾದ ಸಂಘಟನೆಯಾಗಿದ್ದು ನೊಂದಾಯಿತ ಸಂಸ್ಥೆಯಾಗಿರುತ್ತದೆ. ಸಂಘದ ಹೆಸರೇ ಸೂಚಿಸುವಂತೆ ಮುಸ್ಲಿಂ ಸಮೂಹದ ಹಿತದೃಷ್ಟಿಯನ್ನಿಟ್ಟು ಸ್ಥಾಪಿಸಲ್ಪಟ್ಟ ಸಂಘಟನೆಯಾಗಿರುತ್ತದೆ. ಈ ಸಂಘವು ೧೧ ಜನ ಸದಸ್ಯ ಟ್ರಸ್ಟಿಗಳು ಸೇರಿ ಸ್ಥಾಪಿಸಲ್ಪಟ್ಟಿರುತ್ತದೆ. ಜಿಲ್ಲಾಧ್ಯಕ್ಷರಾಗಿ ಪಿ.ಎ.ಹನೀಫ್, ಪ್ರಧಾನಕಾರ್ಯಧರ್ಶಿಯಾಗಿ ಪಿ.ಎಂ.ಸಲಾಂ, ಗೌರವಾಧ್ಯಕ್ಷರಾಗಿ ಪಿ.ಎ.ಹಾರೂನ್, ಉಪಾದ್ಯಕ್ಷರಾಗಿ ಬಿ.ಎ.ರೋಶನ್ ಖಾನ್, ಸಹಕಾರ್ಯಧರ್ಶಿಯಾಗಿ ಪಿ.ಎ.ಸಿರಾಜುದ್ದೀನ್ ಇವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಟ್ರಸ್ಟಿಗಳಾಗಿ
೧. ಕೆ.ಎಚ್.ಶಾದಲಿ
೨. ಎಂ.ಎ.ಶಬ್ಬೀರ್ ಅಹಮದ್
೩. ಎ.ಎ.ಶಫೀಕ್
೪. ಕೆ.ಎಸ್.ಮೊಹಮ್ಮದ್ ರಫೀಕ್
೫. ಕೆ.ಎ.ಸಮದ್
೬. ಎಂ.ಎ.ಮೊಹಮ್ಮದ್ ಆಶೀಂ
೭. ಎಂ.ಯು.ತನ್ಜ಼ೀರ್ ಖಾನ್
ಸಂಘದ ಉದ್ದೇಶ (ಅಜಂಡಾ):-
೧. ಸಮುದಾಯದ ಏಳಿಗೆಗೆ ಹಗಳಿರುಳು ಶ್ರಮಿಸುವುದು
೨. ಸಮುದಾಯದ ಬಡ ಮತ್ತು ಅನಾಥ ಮಕ್ಕಳ ವಿಧ್ಯಾಭ್ಯಾಸಕ್ಕೆ ಪ್ರೊತ್ಸಾಹ
೩. ಸರಕಾರದಿಂದ ಸಮುದಾಯಕ್ಕೆ ಬರುವ ಅನುಧಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶ್ರಮ ವಹಿಸುವುದು
೪. ಅನಾರೋಗ್ಯಪೀಡಿತ ಬಡ ಜನರಿಗೆ ನೆರವು ನೀಡುವುದು
೫. ಅನಾಥ ಮತ್ತು ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ ನೀಡುವುದು
೬. ಇತರ ಸಮುದಾಯದೊಂದಿಗೆ ಸೌಹಾರ್ದತೆಯನ್ನು ಬೆಳೆಸುವುದು
೭. ನಾಡಿನ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಕೈ ಜೋಡಿಸುವುದು
೮. ನಾಡಿನ ಶಾಂತಿ ಮತ್ತು ಪ್ರಗತಿಯ ಏಳಿಗೆಗೆ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುವುದು.