ನಮಸ್ಕಾರ..
ಕರ್ನಾಟಕ ಕಾವಲುಪಡೆ ಮಾದಿಹಳ್ಳಿ ಹೋಬಳಿ ಘಟಕ ದಿನಾಂಕ 25/09/2014 ರಂದು ರಾಜ್ಯಾಧ್ಯಕ್ಷರಾದ ಎಂ. ಮೋಹನಕುಮಾರ ಗೌಡ ಅವರು ಉಧ್ಘಾಟಸುವ ಮೂಲಕ ಶ್ರೀ ಗೀರೀಶ್ ಹೆಚ್. ವಿ. ಅಧ್ಯಕ್ಷರಾಗಿ ನಿಯೋಜನೆಗೊಂಡರು ಹಾಗು ಶ್ರೀ ಶಿವರಾಜು ಇವರು ಕಾರ್ಯಾಧ್ಯಕ್ಷರಾಗಿಯು ನೇಮಕಗೊಳ್ಳುವ ಜೊತೆಗೆ ಸಮಾಜಮುಖಿ ಕೆಲಸಗಳಿಗೆ ತೊಡಗಿಸಿಕೊಳ್ಳುತ್ತೇವೆ ಎಂದು ಪಣತೊಟ್ಟರು.
ಇದೀಗ ಹಲವಾರು ಬಗೆಯ ಸಾಮಾಜಿಕ ಕಾರ್ಯಕ್ರಮಗಳನ್ನ ಜರುಗಿಸಲಾಗಿದೆ.. ಉದಾಹರೆಣೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರಗಳು, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.. ಇದರ ಮೂಲ ಉದ್ದೇಶ ಇಷ್ಟೆ ಎಲ್ಲರೂ ಕನ್ನಡಿಗರಾಗಿರೋಣ.. ... ಕನ್ನಡವನ್ನ ಉಳಿಸಿ ಬೆಳೆಸೋಣ//... ನಾಡು ನುಡಿಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ...
ಜೈ ಕರ್ನಾಟಕ ಮಾತೆ.