ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದ ಸುಭಾಶ್ನಗರದಲ್ಲಿ ಬಿಲ್ಲವ ಸಮಾಜದ ಬಂಧುಗಳು ಜೊತೆಗೂಡಿ ಸಾಮಾಜಿಕ ಪ್ರೇರಣೆಗೆ ಸ್ಪಂದಿಸಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಹೆಸರಿನಲ್ಲಿ 1990ರಲ್ಲಿ ಸೇವಾ ಸಂಸ್ಥೆಯನ್ನು ಸ್ಟಾಪಿಸಿದ್ದು, ಈ ಪುಣ್ಯ ಸಂಸ್ಥೆಯು ಸಮಾಜದ ಕುಂದು ಕೊರತೆಗಳ ಬಗ್ಗೆ ಚಿಂತಿಸುವ ಮತ್ತು ಸಮಾಜದ ಶ್ರೇಯೋಭಿವ್ರದ್ದಿಗೆ ಶ್ರಮಿಸುವ ಒಂದು ಪ್ರಭಲ ಸಂಸ್ಥೆಯಾಗಿ ಬೆಳೆದು ಕಳೆದ 25 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ.